Wednesday, November 6, 2019

ಅನಿರುದ್ದ್ ಯಾಕೆ ಇಷ್ಟ ಆದರು, ಅವರ ಸಾಧನೆಯಿಂದ ಅಲ್ಲ.. ಅವರ ಬಿಹೇವಿಯರ್ ಇಂದ..!! ಜೊತೆ ಜೊತೆಯಲಿ zee ಜೀ ಕನ್ನಡ

ಈ ಧಾರಾವಾಹಿಯಂತೂ ಧಾರಾವಾಹಿಯ ತರಹ ಖಂಡಿತಾ ಇಲ್ಲವೇ ಇಲ್ಲ, ಸಿನಿಮಾಗಿಂತ ವೇಗವಾದ ನಿರೂಪಣೆ ಇದೆ, ಎಲ್ಲವೂ ಫಾಸ್ಟ್... ಫಾಸ್ಟ್...!!, ಇತರೆ ಧಾರಾವಾಹಿಗಳಂತೆ ಇಲ್ಲಿ ದೃಶ್ಯಗಳನ್ನು ಎಳೆದು ಪದೇಪದೇ ತೋರಿಸುವುದೇ ಇಲ್ಲ... ಇದು ಇದರ ಒಂದು ಪ್ಲಸ್ ಪಾಯಿಂಟ್ ಆಗಿದೆ.

ಮತ್ತು ಇದು ಕಾಂಜೀಪೀಂಜಿ ಕಥೆಯಂತೂ ಖಂಡಿತಾ ಅಲ್ಲವೇ ಅಲ್ಲ...!!, ತುಂಬಾ ಪವರ್‌ಫುಲ್ ಕಥೆ.

ಒಬ್ಬ ಕಾರ್ಪೊರೇಟ್ ಜಗತ್ತಿನ ಸಕ್ಸಸ್‌ಫುಲ್ ಬಿಸಿನೆಸ್ ಮ್ಯಾನ್ ಮತ್ತು ಕಿರಿವಯಸ್ಸಿನ ಹುಡುಗಿಯ ನಡುವೆ ಉಂಟಾಗುವ ಭಾವನಾತ್ಮಕ ತಾಕಲಾಟ.

ವಯಸುಗಳ ನಡುವೆ ಮನಸುಗಳ ಮದುವೆ.

ಅವರ ಒಂದು  ಸಂದರ್ಶನ ಮತ್ತು ಕೆಲವು ಎಪಿಸೋಡ್  ನೋಡಿ ಹೃದಯ ತುಂಬಿ ಬಂದಿತು, ಅನಿರುದ್ದರವರು ಥೇಟ್ ಡಾ.ವಿಷ್ಣುವರ್ಧನ್‌ರವರೇ ಆಗಿ ಹೋಗಿದ್ದಾರೆ, ವಿಡಿಯೋ ನೋಡಿದ ನಂತರ ನೀವು ಈ‌ ಮಾತನ್ನು ೧೦೦% ಒಪ್ಪಿಕೊಳ್ತೀರಾ... ಚಾಲೆಂಜ್...!!

ಆರ್ಯವರ್ಧನ್ ಇಲ್ಲಿ ನಮಗೆ ಕಾಣಿಸುವುದು ಖಂಡಿತಾ ವಿಷ್ಣು ಛಾಯೆ.

ಏನೇ ಆದರೂ ನ್ಯಾಯದ ಪರ ನಿಲ್ಲುವುದು, ಹೆಣ್ಣುಮಕ್ಕಳನ್ನು ಗೌರವಿಸುವುದು.., ಆಶಕ್ತರ ಪರ ಯೋಚಿಸುವುದು.., ಅವರ ಗ್ರೇ ಕಲರ್ ಗಡ್ಡ, ಆ ಅಭಿನಯ..., ವಿಷ್ಣುವರ್ಧನ್ ಅವರನ್ನು ನೆನಪಿಸುವ ಉಡುಗೆ ತೊಡುಗೆಗಳು.

ಧಾರಾವಾಹಿ ಇದುವರೆಗಿನ ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡಿ ಹೊಸ ದಾಖಲೆ ನಿರ್ಮಿಸಿದೆ.

ಇದುವರೆಗೂ ಒಮ್ಮೆಯೂ ಧಾರಾವಾಹಿ ನೋಡದವರು.., ಧಾರಾವಾಹಿಗಳನ್ನು ದ್ವೇಷಿಸುವವರು..., (ನನ್ನನ್ನೂ ಸೇರಿಸಿ) ಪ್ರತಿದಿನವೂ ಮರೆಯದೆ ನೋಡುವ ಮೊದಲ ಧಾರಾವಾಹಿ "ಜೊತೆ ಜೊತೆಯಲ್ಲಿ"

ಅನಿರುದ್ದ್ ಅವರನ್ನು ಜನರು ಈಗ ಆರ್ಯವರ್ಧನ್ ಎಂದೇ ಗುರುತಿಸುತ್ತಾರೆ, ಸಾವಿರಾರು ಹುಡುಗಿಯರು ಮಾತ್ರವಲ್ಲದೆ ಹುಡುಗರು ಸಹಾ ಇವರಿಗೆ  ಅಭಿಮಾನಿಗಳು ಆಗಿದ್ದಾರೆ.

ಪ್ರತಿದಿನವೂ ಮೆಸೇಜ್, ಚಾಟ್ ಮಾಡುತ್ತಿದ್ದಾರೆ... ಸತಿ ಹೆಚ್ಚಿನ ಟಿಆರ್‌ಪಿ ಗಳಿಸುವ ಮೂಲಕ ಸಿನಿಮಾಗಿಂತಲೂ ಹೆಚ್ಚಿನ ಲಾಭ ಗಳಿಸುತ್ತಿದೆ.. Zee ಕನ್ನಡದ ಈ ಧಾರಾವಾಹಿ.

ಆದರೆ ಕೆಲವು ಸೋ ಕಾಲ್ಡ್  ಡಬಲ್ ಸ್ಟಾಂಡರ್ಡ್ ವಿಷ್ಣು ಅಭಿಮಾನಿಗಳು  ತಮ್ಮ ಸ್ವಾರ್ಥಗಳಿಗಾಗಿ ವಿಷ್ಣು ಅಣ್ಣನ ಹೆಸರನ್ನು ಗುತ್ತಿಗೆಗೆ ತೆಗೆದುಕೊಂಡಂತೆ ವರ್ತಿಸುವ ಸ್ಟಾರ್‌ಗಳ ಚಿತ್ರಗಳಿಗೆ ಹರಕೆ, ಹಾರೈಕೆಗಳ ಲೇಖನ ಮಾಲೆಗಳನ್ನೇ ಅರ್ಪಿಸುತ್ತಿದ್ದೀರ..., ಆದರೆ ವಿಷ್ಣು ಅಣ್ಣನ ಕುಟುಂಬದ ಕುಡಿಯಾದ ಅನಿರುದ್ದರವರು ಈ ಮಟ್ಟಿಗೆ ಯಶಸ್ಸು ಗಳಿಸಿದ್ದರೂ ಒಂದು ಚಿಕ್ಕ ವಿಶ್ ಕೂಡಾ ಮಾಡದೆ ಬಾಯಿಗೆ ಬೀಗಹಾಕಿಕೊಂಡಂತೆ ವರ್ತಿಸುತ್ತಿರುವುದು... ನಿಜಕ್ಕೂ ದುಃಖ ಕೋಪ ಉಂಟುಮಾಡುತ್ತದೆ.

ನೀನೆಲ್ಲೋ ನಾನೆಲ್ಲೋ ಎಂಬ ದಿನೇಶ್‌ಬಾಬು ನಿರ್ದೇಶನದ ಚಲನಚಿತ್ರವೊಂದರಲ್ಲಿ ಇವರ ಅಭಿನಯ ನೋಡಿ ನನಗೆ ಕೆಟ್ಟಕೋಪವೇ ಬಂದುಬಿಟ್ಟಿತ್ತು... ಯಾಕೆಂದರೆ ಆ ಚಿತ್ರದಲ್ಲಿ ವಿಷ್ಣುವರ್ಧನ್ ಸಹಾ ನಟಿಸಿದ್ದರು.... ಆದರೆ ಇವರು ಅಭಿನಯದಲ್ಲಿ ಸಿಂಹವನ್ನು ಮೀರಿಸಿಬಿಟ್ಟಿದ್ದರು.

ಜೊತೆಗೆ ಅನಿರುದ್ದ್ ಅವರು ಸಾಕಷ್ಟು ಮಾಗಿದ್ದಾರೆ ಅವರು ಮಾತಿನ ಚಾಚಕ್ಯತೆ, ವಿನಯ, ಡೌನ್ ಟು ಅರ್ತ್ ಬಿಹೇವಿಯರ್, ಅವರ ಜ್ಞಾನ ಕೌಶಲ್ಯ, ಉಡುಪು, ಅಭಿನಯ ಅವರನ್ನು ಖಂಡಿತಾ ವಿಷ್ಣು ವರ್ಧನ್ ಅವರ ಉತ್ತರಾಧಿಕಾರಿಯಾಗಿ ಮಾಡಿವೆ.

ಸಿಂಹದ ಅಳಿಯ ಎಂದರೆ ಹೀಗಿರಬೇಕು.

ಅನಿರುದ್ದರವರು ಎಷ್ಟು ಮೆಚ್ಯೂರ್ಡ್ ಆಗಿದ್ದಾರೆಂಬುದಕ್ಕೆ ಅವರ ವಿನಯವಂತಿಕೆ ಈ ಸಂದರ್ಶನ ನೋಡಲೇಬೇಕು.

1) ವಿಡಿಯೋ 1 - News first ಸಂದರ್ಶನ.
 ಸಂದರ್ಶನ ವಿಷ್ಣು ಅಭಿಮಾನಿಗಳಿಗೆ ಸಕ್ಕತ್ ಖುಷಿ‌ಕೊಡುತ್ತದೆ..‌ , ಈ ಸಂದರ್ಶನ ಅವರ ವಿನಯವಂತಿಕೆ, ಸಂಸ್ಕೃತಿಗಳ, ವಿಷ್ಣುವರ್ಧನ್ ನೆರಳಿನ ಪರಿಚಯವಾಗುತ್ತದೆ,  ಆರ್ಯವರ್ಧನ್ ಅಭಿಮಾನಿಯನ್ನಾಗಿ‌‌ ಮಾಡುತ್ತದೆ.

https://m.facebook.com/newsfirstkannada/videos/563351467738877/

2) ವಿಡಿಯೋ 2 - ಧಾರಾವಾಹಿಯ ಒಂದು ಅದ್ಭುತ ಎಪಿಸೋಡ್ - ವ್ಯಕ್ತಿಯ ಸೆಕ್ಯೂರಿಟಿ ಪೋಸ್ಟಗಿಂತ ಅವನ‌ ಪ್ರಾಮಾಣಿಕತೆ ಗೆ ಬೆಲೆ ಕೊಟ್ಟ ಆರ್ಯವರ್ಧನ್
https://m.facebook.com/story.php?story_fbid=2413689865405151&id=378024258971732

3)ವಿಡಿಯೋ 3 - ಮತ್ತೊಂದು ಅತ್ಯದ್ಭುತ ಎಪಿಸೋಡ್.- ಕಾರ್ಖಾನೆಯಲ್ಲಿ ನಡೆಯುತ್ತಿರುವ ಅನ್ಯಾಯ ತಡೆಯಲು ಆರ್ಯವರ್ಧನ್ ಮಾಡಿದ್ದೇನು?
https://www.facebook.com/zeekannadatv/videos/1697207790409517/

4)ವಿಡಿಯೋ 5 -  ಮೂಕಿ ಹುಡುಗಿಯೊಬ್ಬಳು ತನಗೆ ಮಾತು ಬರದಿದ್ದರೂ ತನ್ನ ಮೂಕಭಾಷೆಯಲ್ಲಿ ಇವರ ಅಭಿಮಾನಿ ಯಾಗಿದ್ದನ್ನು ಹಂಚಿಂಡ ಭಾವನಾತ್ಮಕ zee TV ಕಾರ್ಯಕ್ರಮ ವಿಡಿಯೋ
https://www.facebook.com/100013852066563/posts/761866097618452/
ಅದರ ಲೇಖನ
https://tinyurl.com/yyhy9egb

6) ವಿಡಿಯೋ 6 - ಗುಡು ಗುಡುಗುವ ಸಿಂಹ ಹಾಡು &  ಎಲೆ ಹೊಂಬಿಸಿಲೆ ಎಲೆ ತಂಬೆಲರೆ ಹಾಡಿಗೆ ಆರ್ಯವರ್ಧನ್ ಮತ್ತು ಅನು ನೃತ್ಯ
https://www.facebook.com/378024258971732/posts/2489155641191906/

7) ಅನಿರುದ್ದ್ ಸಿಂಹನ ಅಫಿಷಿಯಲ್ ಫೇಸ್‌ಬುಕ್‌ ಪೇಜ್‌
https://www.facebook.com/Anirudhofficialpage/

ಮತ್ತೊಮ್ಮೆ ಹೇಳುತ್ತೇನೆ ವಿಷ್ಣುವರ್ಧನ್ ಅವರ ಉತ್ತರಾಧಿಕಾರಿ ಅನಿರುದ್ದ್ ಮಾತ್ರ, ಇನ್ಯಾರು ಆಗಲು ಸಾದ್ಯವಿಲ್ಲ.., ಸಾಹಸಸಿಂಹ ತನ್ನ ಅಳಿಯನನ್ನು ಆಯ್ಕೆ ಮಾಡುವ ವಿಷಯದಲ್ಲಿ ಒಳ್ಳೆಯ ದಕ್ಷ ನಿರ್ಧಾರ ತೆಗೆದುಕೊಂಡು ಗೆದ್ದಿದ್ದಾರೆ ಎಂದು ಈಗ ಅರ್ಥವಾಗುತ್ತಿದೆ..

ನಿಮಗೆ ಹೀಗೆ ಯಶಸ್ಸು ಸಿಗುತ್ತಿರಲಿ... ಅನಿರುದ್ದ್ ಸರ್... ಬೆಸ್ಟ್ ಆಫ್ ಲಕ್...!!


By
Maruthi Vardhan

ಇಬ್ಬರು ಸನ್ಯಾಸಿಗಳು & ಸುಂದರ ತರುಣಿ

ಬ್ರಹ್ಮಚಾರಿ ಶಿಷ್ಯನು ಹುಡುಗಿಯನ್ನು ಹೊತ್ತು ಕೊಳ್ಳ ಬೇಕಾದ ಸಂದರ್ಭ...!
**
ಒಮ್ಮೆ ಬುದ್ಧನ ಪ್ರೀತಿಯ ಶಿಷ್ಯನಾದ ಆನಂದನು ‌ತನ್ನ ಇನ್ನೊಬ್ಬ ಸಹಪಾಠಿ ಯೊಂದಿಗೆ ನದಿಯನ್ನು ದಾಟುತ್ತಿದ್ದ.., ಆ ಸಮಯದಲ್ಲಿ ಒಬ್ಬಂಟಿ‌ ಸುಂದರವಾದ ವಯಸ್ಸಿನ ತರುಣಿಯೊಬ್ಬಳು ಬಂದು ತನ್ನನ್ನು ಸಹಾ ನದಿ ದಾಟಿಸುವಂತೆ ಗೋಗರೆದಳು.., ಆಕೆ ಒಬ್ಬಂಟಿಯಾಗಿದ್ದು ಇವರೇನಾದರೂ ಸಹಾಯ ಮಾಡದೇ ಹೋಗಿದ್ದರೆ ಅಲ್ಲಿಯೇ ಅಳುತ್ತಾ ಕೂರಬೇಕಾಗಿತ್ತು..

ಇವರು ಸನ್ಯಾಸಿಗಳಾಗಿದ್ದುದರಿಂದ ಹೆಣ್ಣನ್ನು ಮುಟ್ಟಿಸಿಕೊಳ್ಳುವಂತಿರಲಿಲ್ಲ ಮತ್ತು ಆ ರೀತಿಯ ವ್ರತವನ್ನು ಪಾಲಿಸುತ್ತಿದ್ದರು... ಹೀಗಾಗಿ ಸಹಪಾಠಿಯು ಸಹಾಯ ಮಾಡಲು ನಿರಾಕರಿಸಿದನು..

ಆದರೆ ಆನಂದನು ಆಕೆಯನ್ನು ಭುಜದ ಮೇಲೆ ಹೊತ್ತುಕೊಂಡು ನದಿಯನ್ನು ದಾಟಿಸಿದನು.. ಆಕೆಯು ಧನ್ಯವಾದಗಳನ್ನು ತಿಳಿಸಿ ಹೊರಟುಹೋದಳು..

ಇವರಿಬ್ಬರೂ ಅಲ್ಲಿಂದ ಹೊರಟು ಒಂದು ಊರನ್ನು ಸೇರಿಕೊಂಡು ಅಲ್ಲಿನ ಜನರು‌ ಕೊಟ್ಟ ಬಿಕ್ಷೆಯನ್ನು‌ ಸ್ವೀಕರಿಸಿ ರಾತ್ರಿ ಒಂದು ಧರ್ಮಛತ್ರದಲ್ಲಿ ತಂಗಿದರು...,

ಆನಂದನು ಚೆನ್ನಾಗಿ ನೆಮ್ಮದಿಯ ನಿದ್ದೆ ಮಾಡಿದನು..., ಆದರೆ ‌ಗೆಳೆಯನಿಗೆ ನಿದ್ದೆ ಬರಲಿಲ್ಲ.., ಮನದಲ್ಲಿ ಏನೋ ತಳಮಳ....,  ಮಧ್ಯರಾತ್ರಿಯಲ್ಲಿ ಆನಂದನನ್ನು ಎಬ್ಬಿಸಿ ಈ ರೀತಿ ಕೇಳಿದನು...,

"ಅಲ್ಲಾ ಕಣೋ... ನಾವು ಸನ್ಯಾಸಿಗಳು... ನಾವು ಹೆಣ್ಣನ್ನು ಮುಟ್ಟುವಂತಿಲ್ಲ..., ಆದರೆ ನೀನು ಆ ತರುಣಿಯನ್ನು‌ ಹೊತ್ತುಕೊಂಡಿದ್ದೆಯಲ್ಲ... ಇದು ಸರಿಯೇ.. " ಎಂದು ‌ಕೇಳಿದನು...

ಅದಕ್ಕೆ ಆನಂದನು... " ಹೌದಪ್ಪಾ ನಾನು ಅವಳನ್ನು ‌ಹೊತ್ತುಕೊಂಡಿದ್ದು ನಿಜ... ಆದರೆ ಅವಳನ್ನು ನದಿ ದಾಟಿಸಿದ ನಂತರ ಅಲ್ಲಿಯೇ ಇಳಿಸಿಬಿಟ್ಟೆ......, ಆದರೆ........ ನೀನು‌ ಇನ್ನೂ ಹೊತ್ತುಕೊಂಡೇ ಇದ್ದೀಯಲ್ಲಪ್ಪಾ....!!!!"
ಎಂದು ಉತ್ತರಿಸಿದನು.
**

20 ವರ್ಷಗಳ ಹಿಂದೆ ಚಂದಮಾಮ ಪುಸ್ತಕ ದಲ್ಲಿ ಓದಿದ್ದು..

By-
Maruthi Vardhan



By - ಮಾರುತಿವರ್ಧನ್